Thought for the day

One of the toughest things in life is to make things simple:

16 Dec 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÉÆøÀzÀ ¥ÀæPÀgÀtzÀ ªÀiÁ»w:-
             ದಿನಾಂಕ: 15-12-2015 ರಂದು ಸಂಜೆ 4.30 ಗಂಟೆಗೆ ಶ್ರೀ ಬಾಲಚಂದ್ರ ತಂದೆ ರಾಮಜೀ ನಾಯಕ ವಯ: 70 ವರ್ಷ ಉ: ನಿವೃತ್ತ ಡಿ.ಎಸ್.ಪಿ (ವೈರಲೆಸ್) ಸಾ|| ಆಶಿಹಾಳ ತಾಂಡಾ ತಾ|| ಲಿಂಗಸೂಗೂರು ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ರಾಯಚೂರು ನಗರದ ತಿಮ್ಮಾಪುರ ಪೇಟೆಯ ಏರಿಯಾದ ಜೆಂಡಾ ಕಟ್ಟೆ ಹತ್ತಿರ ಇರುವ ತಿಕ್ಕಣ್ಣ ತಂದೆ ಸಾಬಣ್ಣ ಎಂಬುವವರ ಪ್ಲಾಟ್ ನಂ: 6-4-110, 15 X 20 ಅಡಿ ಮತ್ತು ಸದರಿ ಪ್ಲಾಟಿಗೆ ಹೊಂದಿಕೊಂಡಿದ್ದ ಹಬೀದಾಬೀ ಎಂಬುವವರ ಪ್ಲಾಟ್ ನಂ: 4-6-119 15 X 20 ಅಡಿ ಇದ್ದವುಗಳನ್ನು 1998 ರಲ್ಲಿ ತಮ್ಮ ತಂದೆಯವರ ಹೆಸರಿನಲ್ಲಿ ನೊಂದಣಿ ಮಾಡಿಸಿದ್ದು ಇರುತ್ತದೆ. ತಮ್ಮ ತಂದೆಯವರು 18-06-1997 ರಂದು ತಮ್ಮ ತಾಂಡಾದಲ್ಲಿ ಮೃತ ಪಟ್ಟಿದ್ದು ಇರುತ್ತದೆ. 2010 ನೇ ಸಾಲಿನಲ್ಲಿ ಜಿಡಿ ತೋಟಾ ಏರಿಯಾದ ನೂರ್ ಅಹ್ಮದ್ ಎಂಬುವವನು ಪ್ಲಾಟ್ ನಂ: 06-04-109 ನೇದ್ದನ್ನು ಮಹ್ಮದ್ ಮನ್ಸೂರ ಅಹ್ಮದ್ ಎಂಬುವವನ್ನು ಸಾಕ್ಷಿಯನ್ನಾಗಿ ಮಾಡಿಕೊಂಡು ನೋಟರಿ ರವರಿಂದ ತಮ್ಮ ತಂದೆಯವರು ದಿನಾಂಕ: 04-02-2015 ರಂದು ಜಿಡಿ ತೋಟಾದಲ್ಲಿ ಇರುವ ಮೇಲೆ ನಮೂದು ಮಾಡಿದ ನಿವೇಶನದಲ್ಲಿ ಮರಣ ಹೊಂದಿರುತ್ತಾರೆಂದು ದಿನಾಂಕ: 24-11-2015 ರಂದು ಖೊಟ್ಟಿ ಮರಣ ಪ್ರಮಾಣ ಪತ್ರವನ್ನು ಸೃಷ್ಠಿಸಿ ಮಾನ್ಯ ಸಿವಿಲ್ ನ್ಯಾಯಾಲಯದ ಓ.ಎಸ್ ನಂ: 55/2013 ರಲ್ಲಿ ದಿನಾಂಕ: 24-11-2015 ರಿಂದ 10-12-2015 ರ ಮಧ್ಯದ ಅವಧಿಯಲ್ಲಿ ಸದರಿ ಖೊಟ್ಟಿ ಮರಣ ಪ್ರಮಾಣ ಪತ್ರವನ್ನು ನೈಜ ದಾಖಲೆ ಎಂದು ಮಾನ್ಯ ನ್ಯಾಯಾಲಯಕ್ಕೆ ನಂಬಿಕೆ ಬರುವಂತೆ ಸಲ್ಲಿಸಿದ್ದು ಇರುತ್ತದೆ. ಕಾರಣ ನೂರ್ ಮಹ್ಮದ್ ಮತ್ತು ಮಹ್ಮದ್ ಮನ್ಸೂರ್ ಅಹ್ಮದ್ ಇವರುಗಳ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ¸ÀzÀgÀ §eÁgÀ ಠಾಣಾ ಗುನ್ನೆ ನಂ: 279/2015 ಕಲಂ: 406, 465, 420 ಸಹಿತ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.